ಅವಳ ಪ್ರೀತಿಗೆ ಸಾಟಿ ಇಲ್ಲ ಅಮೃತ...
ಅವಳ ಹೃದಯ ಕನ್ನಡಾಂಬೆಯ ದೇವಾಲಯದಂತೆ ಅದ್ಭುತ...
ಅವಳ ಕಂಗಳಲ್ಲಿ ಕಂಡ ಪ್ರೀತಿಯ ಕಂಡು, ಇದೆ ನನ್ನ ನಿಜವಾದ ಅರ್ಥ ಎಂದಿತು ನಿಸ್ವಾರ್ಥ
ನನ್ನ ಅವಳ ಮಿಲನಕ್ಕೆ ಆ ದೇವರೇ ಇಟ್ಟು ಮುಹೂರ್ತ
ಅವಳನ್ನು ಸದಾ ನೆನೆಯುವುದನ್ನು ಕಂಡು ಅಸೂಯೆ ಪಟ್ಟ ಆ ಸೃಷ್ಟಿಕರ್ತ....
ಅವಳೇ ಈ ಹೃದಯಕ್ಕೆ ಉಸಿರು, ಈ ಹೃದಯದ ಬಡಿತ...
ಈ ಮನದ ಮುಗಿಲಿನ ಮಿಡಿತ
ಅವಳ ಅಪ್ಪುಗೆಯೇ ಈ ಬಾಹುಗಳ ತುಡಿತ...
ಅವಳ ಪ್ರೀತಿ ಈ ಹೃದಯದಲ್ಲಿ, ಹೃದಯದ ಉಸಿರಿನಲ್ಲಿ, ಹೃದಯದ ಪಿಸುಮಾತಿನಲ್ಲಿ ಶಾಶ್ವತ.....
ಈ ಹೃದಯದ ಉಸಿರಿಗೆ,
ದರ್ಶನ್.......
.ನಿನ್ನ ಪ್ರೀತಿಗೆ ಬೆರಗಾಗಿ ನಿನ್ನ ಹೃದಯಕ್ಕೆ ಉಸಿರಾಯಿತು ತಂಗಾಳಿ...
ನಿನ್ನ ಕಂಡ ಕಾಮನಬಿಲ್ಲಿಗೂ ಆಸೆಯಂತೆ ನಿನ್ನೊಂದಿಗೆ ಆಡಲು ಹೋಳಿ...
ಕನಸುಗಳ ಮನೆಯಂಗಳದಲ್ಲಿ ಹಾಕಿದೆ ಪ್ರೀತಿಯ ರಂಗೋಲಿ...
ನಿನ್ನ ಬಾಹುಬಂಧನಕ್ಕೆ ಸಿಕ್ಕ ಸುಡುಬೇಸಿಗೆಗೂ ಆಯಿತು ಚಳಿ...
ಕತ್ತಲಾದ ಬಾಳಲ್ಲಿ ನೀನು ದೀಪ ಹಚ್ಚಿದಾಗ ಹೃದಯದಲ್ಲಿ ದೀಪಾವಳಿ...
ನಿನ್ನ ಚಂದ್ರನಂತಹ ಕಂಗಳಿಗೆ ಹುಣ್ನಿಮೆಯಾಯಿತು ಕರಾವಳಿ.....
ನಿನ್ನ ಕೊರಳಿನಲ್ಲಿ ನಾನಾಗಬೇಕು ತಾಳಿ......
ವರ್ಷದಲ್ಲಿ ನಮ್ಮ ಪ್ರೀತಿಯ ಪ್ರತಿರೂಪಕ್ಕೆ ನೀನು ಹಾಡಬೇಕು ಲಾಲಿ....
ಅಂದರು, ಅಸೂಯೆ ಪಡುವುದು ಮಲ್ಲಿಗೆಯ ಕಂಪು,
ಏಕೆಂದರೆ ಸನಿಹದಲ್ಲಿದ್ದರೆ ನೀನು, ಬಿಸಿಲಿನಲ್ಲಿಯೂ ಹೊಂಗೆಯ ನೆರಳಂತೆ ಕಂಪು...
ನಿನ್ನನ್ನು ಕಂಡು ಅಂದರು ಬೇಂದ್ರೆ.....
ನೀನೇನಾ ಪ್ರೀತಿ ಅಂದ್ರೆ????
ನಿನ್ನ ಮನವ ಕಂಡು ಹೇಳಿದರು ಮಾಸ್ತಿ...
ನೀನೆಂದು ದರ್ಶನನ ಹೃದಯದ ಆಸ್ತಿ.....
ನಿನ್ನ ಕಂಗಳ ದೆದೀಪ್ಯಮಾನವಾದ ಬೆಳಕಿಗೆ ಬೆರಗಾದ ಆ ಕಡಲ ತೀರದ ಭಾರ್ಗವ...
ಅಂದರು, ಕೋಗಿಲೆಯ ಪ್ರತಿ ಹಾಡಿನಲ್ಲಿಯೂ ನಿನ್ನದೇ ಕಲರವ...
ಹೃದಯದ ಊರಿನಲ್ಲಿ ನಿನ್ನದೇ ಉತ್ಸವ....
ನಿನ್ನ ಕಾಲ್ಗೆಜ್ಜೆಯ ನಾದವ ಕೇಳಿ ಮರೆತಳು ಶಾರದೆ ಮೀಟುವುಡು ವೀಣೆಯ ತಂತಿ,
ಆಕಾಶದ ಎತ್ತರಕ್ಕೆ ಬೆಳೆಯಲಿ ನಿನ್ನ ಕೀರ್ತಿ,
ನೀರಿನಂತೆ ನಿರ್ಮಲವಾದ ನಿನ್ನ ನಗುವನ್ನು ಕಂಡು ಹೀಗೆ ಕೊಂಡಾಡಿದರು ಅನಂತಮೂರ್ತಿ...
ಮುಸ್ಸಂಜೆಯ ಕೆಂಪಾದ ಮೋಡಗಳನ್ನು ನಾಚಿಸುವ ನಿನ್ನ ಕೆನ್ನೆ ಕಂಡು ಕೇಳಿದನು ಆ ಗೋಕಾಕ...
ಯಾರಮ್ಮ ನಿನ್ನ ಬಾಳ ದೋಣಿಯ ನಾವಿಕ????
ಭೂಮಿಯಂತೆ ನಿಶ್ಚಲವಾದ ನಿನ್ನ ಮನಸ್ಸಿಗೆ ಮಳೆ ಸುರಿಸಿ ಪುನೀತವಾಯಿತು ಕಾರ್ಮೋಡ,
ನಿನ್ನ ವರ್ಣಿಸಲು ಪದಗಳಿಗೆ ಹುಡುಕಿತು ಕನ್ನಡ.....
ಕನ್ನಡಾಂಬೆಯ ಹಣೆಯ ಕುಂಕುಮದಸ್ಟು ಪವಿತ್ರವಾದ ನಿನ್ನ ಪ್ರೀತಿಗೆ ಧನ್ಯನಾಗಿ ಅಂದನು
ಆ ಗಿರೀಶ್ ಕಾರ್ನಾಡ....
ಭೂಪಟದಲ್ಲಿ ಮೆರೆಸಬೇಕೆಂದು ಪ್ರೀತಿಯ ಭವ್ಯ ಪರಂಪರೆಯನ್ನು ಸಾರುವ ನಿನ್ನಂಥ ಹೆಣ್ಣು ಇರುವ,
ಹೆಸರಿನಲ್ಲಿಯೇ ಕರುಣೆ ಇರುವ ನಮ್ಮ ಕರುನಾಡ............
ದರ್ಶನ್.......
ಈ ಮನದಾಳದ ಮಾತಿಗೆ ಸ್ಪೂರ್ತಿ...
ಪ್ರೀತಿಯಿಂದ ಹೃದಯವನ್ನು ಕೊಂದ ಒಬ್ಬಳು ಕೊಲೆಗಾತಿ...
ಅವಳು ಮನಸ್ಸನ್ನು ಕದ್ದ ಕಳ್ಳಿ
ಆಗಿರದೆ ಪ್ರೀತಿಯ ಮರದ ಬಳ್ಳಿ, ಇಟ್ಟಳು ಈ ಮನದ ಹುಚ್ಚು ಆಸೆ, ಕನಸುಗಳಿಗೆ ಕೊಳ್ಳಿ.....
ಹೃದಯ ಇಂದು ಪಾಳು ಬಿದ್ದ ಮನೆಯ ಅವಶೇಷ......
ಕಾರಣ, ಮಗುವಿನಂಥ ಮುಗ್ಧತೆಯಿಂದ ಪ್ರೀತಿಸಿದ ಮನಸ್ಸಿಗೆ ಅವಳು ಮಾಡಿದ ಮೋಸ...
ನಾನಂದುಕೊಂಡಿದ್ದೆ ಅವಳು ಆಗುವಳು ಈ ಹೃದಯದ ಪ್ರೀತಿ ದಾಹ ತೀರಿಸುವ ಜೀವನದಿ,
ಆದರೆ ಅವಳು ಈ ಹೃದಯ ಉಸಿರಾದದಂತೆ ಕಟ್ಟಿಬಿಟ್ಟಳು ಸಮಾಧಿ......
ಗಿದದಲ್ಲಿರುವ ಹೂವು ಅರಳಲು ಪ್ರತಿನಿತ್ಯ ಹಾಕಬೇಕು ನೀರು,,,,
ಒಡೆದ ಹೃದಯದಿಂದ ಸುರಿಯುತ್ತಿರುವ ರಕ್ತ ಅಳಿಸಲು ನಿತ್ಯ ಹಾಕುತ್ತಿದೆ ಮನಸ್ಸು ವೇದನೆಯ ಕಣ್ಣೀರು.....
ಪ್ರೀತ್ಸೋಕೆ ಮುಂಚೆ ಒಂದು ಕ್ಷಣ ಯೋಚಿಸಿ ಹೃದಯಗಳೇ.... ಆಡಿದರೆ ಹೋಯಿತು ಮಾತು, ಕಳೆದರೆ ಹೋಯಿತು ಮುತ್ತು, ಸೇರಿಸಲಾಗದು ಒಡೆದ ಹೃದಯವನ್ನು ಯಾವತ್ತೂ....
ದೂರವಾಗುತ್ತಿದೆ ಮನದಲ್ಲಿದ್ದ ಕೊರಗು...
ಹೃದಯದ ಪಿಸುಮಾತಿಗೆ ಮತ್ತೆ ಬಂದಿದೆ ಮೆರಗು...
ಮನದಲ್ಲಿ ಮೂಡಿದೆ ಹೂನಗು...
ಹೃದಯದ ತುಂಬಾ ಪ್ರೀತಿಯ ಹೋಳಿಯ ರಂಗು..
ನೀನೆ ನನ್ನ ಸರದಾರ ಎಂದಿತು ಅವಳ ಸೆರಗು....
ಸುರಿಸುತ ಪ್ರೀತಿಯ ಜೆನ ಮಳೆ ಅವಳ ಉಸಿರಿಗೂ,,
ಆದೆ ನಾನು ಅವಳ ಮಡಿಲಿನಲ್ಲಿ ಮಗು...
