ಮಧುರವಾದ ಕಲ್ಪನೆ...... ಸಿಹಿಯಾದ ಭಾವನೆ.....

ನಿನ್ನ ಉಸಿರಿನ ತಂಗಾಳಿಗೆ ಮನಸೋತ ಕುವೆಂಪು...
ಅಂದರು, ಅಸೂಯೆ ಪಡುವುದು ಮಲ್ಲಿಗೆಯ ಕಂಪು,
ಏಕೆಂದರೆ ಸನಿಹದಲ್ಲಿದ್ದರೆ ನೀನು, ಬಿಸಿಲಿನಲ್ಲಿಯೂ ಹೊಂಗೆಯ ನೆರಳಂತೆ ಕಂಪು...
ನಿನ್ನನ್ನು ಕಂಡು ಅಂದರು ಬೇಂದ್ರೆ.....
ನೀನೇನಾ ಪ್ರೀತಿ ಅಂದ್ರೆ????

ನಿನ್ನ ಮನವ ಕಂಡು ಹೇಳಿದರು ಮಾಸ್ತಿ...
ನೀನೆಂದು ದರ್ಶನನ ಹೃದಯದ ಆಸ್ತಿ.....
ನಿನ್ನ ಕಂಗಳ ದೆದೀಪ್ಯಮಾನವಾದ ಬೆಳಕಿಗೆ ಬೆರಗಾದ ಆ ಕಡಲ ತೀರದ ಭಾರ್ಗವ...
ಅಂದರು, ಕೋಗಿಲೆಯ ಪ್ರತಿ ಹಾಡಿನಲ್ಲಿಯೂ ನಿನ್ನದೇ ಕಲರವ...
ಹೃದಯದ ಊರಿನಲ್ಲಿ ನಿನ್ನದೇ ಉತ್ಸವ.... 

ನಿನ್ನ ಕಾಲ್ಗೆಜ್ಜೆಯ ನಾದವ ಕೇಳಿ ಮರೆತಳು ಶಾರದೆ ಮೀಟುವುಡು ವೀಣೆಯ ತಂತಿ,
ಆಕಾಶದ ಎತ್ತರಕ್ಕೆ ಬೆಳೆಯಲಿ ನಿನ್ನ ಕೀರ್ತಿ,
ನೀರಿನಂತೆ ನಿರ್ಮಲವಾದ ನಿನ್ನ ನಗುವನ್ನು ಕಂಡು ಹೀಗೆ ಕೊಂಡಾಡಿದರು ಅನಂತಮೂರ್ತಿ...
ಮುಸ್ಸಂಜೆಯ ಕೆಂಪಾದ ಮೋಡಗಳನ್ನು ನಾಚಿಸುವ ನಿನ್ನ ಕೆನ್ನೆ ಕಂಡು ಕೇಳಿದನು ಆ ಗೋಕಾಕ...
ಯಾರಮ್ಮ ನಿನ್ನ ಬಾಳ ದೋಣಿಯ ನಾವಿಕ????

ಭೂಮಿಯಂತೆ ನಿಶ್ಚಲವಾದ ನಿನ್ನ ಮನಸ್ಸಿಗೆ ಮಳೆ ಸುರಿಸಿ ಪುನೀತವಾಯಿತು ಕಾರ್ಮೋಡ,
ನಿನ್ನ ವರ್ಣಿಸಲು ಪದಗಳಿಗೆ ಹುಡುಕಿತು ಕನ್ನಡ.....
ಕನ್ನಡಾಂಬೆಯ ಹಣೆಯ ಕುಂಕುಮದಸ್ಟು ಪವಿತ್ರವಾದ ನಿನ್ನ ಪ್ರೀತಿಗೆ ಧನ್ಯನಾಗಿ ಅಂದನು
ಆ ಗಿರೀಶ್ ಕಾರ್ನಾಡ....
ಭೂಪಟದಲ್ಲಿ ಮೆರೆಸಬೇಕೆಂದು ಪ್ರೀತಿಯ ಭವ್ಯ ಪರಂಪರೆಯನ್ನು ಸಾರುವ ನಿನ್ನಂಥ ಹೆಣ್ಣು ಇರುವ,
ಹೆಸರಿನಲ್ಲಿಯೇ ಕರುಣೆ ಇರುವ ನಮ್ಮ ಕರುನಾಡ............ 


ಹೃದಯದಿಂದ...........
   ದರ್ಶನ್.......