ಈ ಹೃದಯದ ಉಸಿರಿಗೆ.... ("ಮಳೆಯಲಿ ಜೊತೆಯಲಿ"ಯ ಏನೋ ಹೇಳಬೇಕು ಅಂದೇ ಏನದು ಧಾಟಿಯಲ್ಲಿ)

ನಿನ್ನ ಕಂಗಳಲ್ಲಿ ಕಂಡೆ ನನ್ನನೇ,,,
ಕಾರಣವಿಲ್ಲದೆ ನಿನ್ನವನಾದೆ ಸುಮ್ಮನೆ...
ಬೇಕಾಗಿದೆ ಈಗ ಸ್ಪಷ್ಟನೆ...

ಹೃದಯದ ತಪ್ಪಿಗೆ,,
ಸಿಕ್ಕಿತು ಅಪ್ಪುಗೆ....
ಮೆಲ್ಲನೆ ಹಾಕಿದೆ ಮನಕ್ಕೆ ಮುತ್ತಿಗೆ.......
 

ನನ್ನ ಪ್ರೀತಿ ಅಪರಂಜಿ...  
ನೀ ಮಾಡು ಮುತುವರ್ಜಿ,,,
ನೀ ತೋರಿದ ಕಾಳಜಿಗೆ,,,,  ಕಣ್ ತುದಿಯಲ್ಲಿ ಕಾರಂಜಿ......


  ಈ ಹೃದಯದ ಉಸಿರಿಗೆ....
         ದರ್ಶನ್.....  

ಈ ಹೃದಯದ ಉಸಿರಿಗೆ.... (ಜಾಕಿ ಚಿತ್ರದ "ಎರಡು ಜಡೆಯನ್ನು" ಧಾಟಿಯಲ್ಲಿ...)

ಮನದ ಮುಗಿಲಲ್ಲಿ,
ಪ್ರೀತಿ ಮಳೆಯಾಗಿ,
ಈ ಹೃದಯ ಹಗುರಾಗಿದೆ.....

ಹೃದಯ ಹಗುರಾಗಿ,
ನೀ ಸಿಕ್ಕ ಕನಸು,,,
ನನಸಾಗಿ ನಗೆ ಬೀರಿದೆ....

ನೀ ಸನಿಹ ಬಂದಾಗ, ಮುತ್ತೊಂದ ನೀಡೆಂದು ಕೇಳೋದು ಒಲವಲ್ಲವೇ????
ನೀ ನಾಚಿ ದೂರಾಗಿ, ತುಟಿ ನಿಂದು ಸಿಗದಾಗ ಕಣ್ಣೀರು ತಪ್ಪೋಲ್ಲವೇ....

ನೀ ಕೊಟ್ಟ ಪ್ರೀತಿ..
ನನ್ನ ತಾಯಿ ರೀತಿ..
ತಾಯನ್ನೇ ನೀ ಮರೆಸಿದೆ ...

ನಿನ್ನ ಮಡಿಲಲ್ಲಿ,,
ನಾನು ಮಗುವಾಗಿ...
ನಿನ್ನುಸಿರನೇ ಉಸಿರಾಡುವೆ......

ಪ್ರೀತಿಗೆ ನಾ ಸೋತು, ನಿನ್ನನ್ನು ನಾ ಗೆದ್ದೆ, ನನ್ನ ಮಾತು ನಿಜವಲ್ಲವೆ???
ನಿನ್ನ ತೋಳ ಸೆರೆಯಲ್ಲಿ ನಾ ಬಂದು ಅವಿತಾಗ, ಪ್ರೀತಿಯು ಶುರುವಲ್ಲವೇ...

(ಈ ಹೃದಯದ ಉಸಿರಿಗೆ) ಕರುನಾಡ ಹೆಣ್ಣಿಗೆ ಅಲಂಕಾರ....

ನಿನ್ನ ಕಣ್ಣಿಗೆ ಕಾಡಿಗೆ ಆಯಿತು ಕರಾವಳಿ...
ನಿನ್ನ ಕಂಗಳ ಬೆಳಕಿನಿಂದಲೇ ಕರುನಾಡಿಗೆ ದೀಪಾವಳಿ...
ನಿನ್ನ ಉಸಿರಿನ ಪರಿಮಳಕ್ಕೆ ಸಾಟಿ ಇಲ್ಲ ಗಂಧದಗುಡಿಯ ಗಂಧಸಿರಿ..
ನಿನ್ನ ಚೆಲುವಿನಿಂದಲೇ ಇತಿಹಾಸ ಸೇರಿದ್ದು ಐಹೊಳೆಯ ಐಸಿರಿ...

ನಿನ್ನ ನಗು ನಗುವಿನಹಳ್ಳಿಯೇ ನಾಚುವಷ್ಟು ಸುಂದರ...
ನಿನ್ನ ಕ್ಯಗಳಿಗೆ ಬಳೆ ತೊಡಿಸಬೇಕಂತೆ ಬನವಾಸಿಯ ಬಳೆಗಾರ...
ನಿನ್ನ ಸೆಳೆಯಲೆಂದೇ ಕಿಂದರಿ ಜೋಗಿ ಊದಲು ಕಲಿತಿದ್ದು ತುತ್ತೂರಿ...
ನಿನ್ನ ಸೋಕಿ ಪುನೀತಳಾದಳು ಕೊಡಗಿನ ಕಾವೇರಿ...

ನಿನ್ನ ಕೇಶರಾಶಿಯ ಕಂಡು ಭೋರ್ಗರೆಯಿತು ಭರಚುಕ್ಕಿಯ ಜಲಪಾತ...
ನಿನ್ನ ಬಾಹುಗಳ ಬೆಚ್ಚನೆಯ ಅಪ್ಪುಗೆಯಿಂದ ಬಯಲುಸೀಮೆಯ ಬೆಟ್ಟಗಳಲ್ಲೂ ಹಿಮಪಾತ...
ನಮ್ಮ ಮದುವೆಗೆ ಮಲೆನಾಡು ಆಯಿತು ದಿಬ್ಬಣ...
ನಮ್ಮ ಹೃದಯಗಳ ಮಿಲನಕ್ಕೆ ಸಾಕ್ಷಿ ಮುರ್ಡೆಶ್ವರದ ಮೂಡಣ..

ನಿನ್ನ ನಾಡಿ ಮಿಡಿತದ ನಾದಕ್ಕೆ ಶ್ರುತಿ ಸೇರಿಸಿತು ರಂಗನತಿಟ್ಟಿನ ಕೋಗಿಲೆಯ ಕಲರವ,,
ಹೃದಯಂಗಮವಾದ ನಿನ್ನ ಪ್ರೀತಿಯಿಂದಲೇ ತುಂಗಭದ್ರೆಯ ಮಡಿಲಿನಲ್ಲಿ ನಿತ್ಯೋತ್ಸವ....
ನಿನ್ನ ಹಣೆಯಲ್ಲಿ ರಾರಾಜಿಸುವ ಕುಂಕುಮವ ಕಂಡು ಕನ್ನಡ ಆಚರಿಸಿತು ರಾಜ್ಯೋತ್ಸವ...

ಇಂತಹ ನನ್ನ ಕರುನಾಡ ಹೆಣ್ಣು ಹೆತ್ತ ಈ ಕರುನಾಡಿಗೆ ನನ್ನ ಕೊಡುಗೆ,
ದೇಹ ಕನ್ನಡದ ಮಣ್ಣಿಗೆ,,,
ಪ್ರಾಣ ಕನ್ನಡಮ್ಮನ ಮಗಳಾದ ಈ ಹೃದಯದ ಉಸಿರಿಗೆ....



  ಹೃದಯದಿಂದ ಈ ಹೃದಯದ ಉಸಿರಿಗೆ,
            ದರ್ಶನ್...........  

ಈ ಹೃದಯದ ಉಸಿರಿಗೆ......

ಅವಳ ಪ್ರೀತಿಗೆ ಸಾಟಿ ಇಲ್ಲ ಅಮೃತ...
ಅವಳ ಹೃದಯ ಕನ್ನಡಾಂಬೆಯ ದೇವಾಲಯದಂತೆ ಅದ್ಭುತ...
ಅವಳ ಕಂಗಳಲ್ಲಿ ಕಂಡ ಪ್ರೀತಿಯ ಕಂಡು, ಇದೆ ನನ್ನ ನಿಜವಾದ ಅರ್ಥ ಎಂದಿತು ನಿಸ್ವಾರ್ಥ
ನನ್ನ ಅವಳ ಮಿಲನಕ್ಕೆ ಆ ದೇವರೇ ಇಟ್ಟು ಮುಹೂರ್ತ
ಅವಳನ್ನು ಸದಾ ನೆನೆಯುವುದನ್ನು ಕಂಡು ಅಸೂಯೆ ಪಟ್ಟ ಆ ಸೃಷ್ಟಿಕರ್ತ.... 
ಅವಳೇ ಈ ಹೃದಯಕ್ಕೆ ಉಸಿರು, ಈ ಹೃದಯದ ಬಡಿತ...
ಈ ಮನದ ಮುಗಿಲಿನ ಮಿಡಿತ
ಅವಳ ಅಪ್ಪುಗೆಯೇ ಈ ಬಾಹುಗಳ ತುಡಿತ...
ಅವಳ ಪ್ರೀತಿ ಈ ಹೃದಯದಲ್ಲಿ, ಹೃದಯದ ಉಸಿರಿನಲ್ಲಿ,  ಹೃದಯದ ಪಿಸುಮಾತಿನಲ್ಲಿ ಶಾಶ್ವತ.....  



ಈ ಹೃದಯದ ಉಸಿರಿಗೆ, 
          ದರ್ಶನ್.......

ಈ ಹೃದಯದ ಉಸಿರಿಗೆ......

.ನಿನ್ನ ಪ್ರೀತಿಗೆ ಬೆರಗಾಗಿ ನಿನ್ನ ಹೃದಯಕ್ಕೆ ಉಸಿರಾಯಿತು ತಂಗಾಳಿ...
ನಿನ್ನ ಕಂಡ ಕಾಮನಬಿಲ್ಲಿಗೂ ಆಸೆಯಂತೆ ನಿನ್ನೊಂದಿಗೆ ಆಡಲು ಹೋಳಿ...
ಕನಸುಗಳ ಮನೆಯಂಗಳದಲ್ಲಿ ಹಾಕಿದೆ ಪ್ರೀತಿಯ ರಂಗೋಲಿ...
ನಿನ್ನ ಬಾಹುಬಂಧನಕ್ಕೆ  ಸಿಕ್ಕ ಸುಡುಬೇಸಿಗೆಗೂ ಆಯಿತು ಚಳಿ...
ಕತ್ತಲಾದ ಬಾಳಲ್ಲಿ ನೀನು ದೀಪ ಹಚ್ಚಿದಾಗ ಹೃದಯದಲ್ಲಿ ದೀಪಾವಳಿ...
ನಿನ್ನ ಚಂದ್ರನಂತಹ ಕಂಗಳಿಗೆ ಹುಣ್ನಿಮೆಯಾಯಿತು ಕರಾವಳಿ.....
ನಿನ್ನ ಕೊರಳಿನಲ್ಲಿ ನಾನಾಗಬೇಕು ತಾಳಿ......
ವರ್ಷದಲ್ಲಿ ನಮ್ಮ ಪ್ರೀತಿಯ ಪ್ರತಿರೂಪಕ್ಕೆ ನೀನು ಹಾಡಬೇಕು ಲಾಲಿ....

ಮಧುರವಾದ ಕಲ್ಪನೆ...... ಸಿಹಿಯಾದ ಭಾವನೆ.....

ನಿನ್ನ ಉಸಿರಿನ ತಂಗಾಳಿಗೆ ಮನಸೋತ ಕುವೆಂಪು...
ಅಂದರು, ಅಸೂಯೆ ಪಡುವುದು ಮಲ್ಲಿಗೆಯ ಕಂಪು,
ಏಕೆಂದರೆ ಸನಿಹದಲ್ಲಿದ್ದರೆ ನೀನು, ಬಿಸಿಲಿನಲ್ಲಿಯೂ ಹೊಂಗೆಯ ನೆರಳಂತೆ ಕಂಪು...
ನಿನ್ನನ್ನು ಕಂಡು ಅಂದರು ಬೇಂದ್ರೆ.....
ನೀನೇನಾ ಪ್ರೀತಿ ಅಂದ್ರೆ????

ನಿನ್ನ ಮನವ ಕಂಡು ಹೇಳಿದರು ಮಾಸ್ತಿ...
ನೀನೆಂದು ದರ್ಶನನ ಹೃದಯದ ಆಸ್ತಿ.....
ನಿನ್ನ ಕಂಗಳ ದೆದೀಪ್ಯಮಾನವಾದ ಬೆಳಕಿಗೆ ಬೆರಗಾದ ಆ ಕಡಲ ತೀರದ ಭಾರ್ಗವ...
ಅಂದರು, ಕೋಗಿಲೆಯ ಪ್ರತಿ ಹಾಡಿನಲ್ಲಿಯೂ ನಿನ್ನದೇ ಕಲರವ...
ಹೃದಯದ ಊರಿನಲ್ಲಿ ನಿನ್ನದೇ ಉತ್ಸವ.... 

ನಿನ್ನ ಕಾಲ್ಗೆಜ್ಜೆಯ ನಾದವ ಕೇಳಿ ಮರೆತಳು ಶಾರದೆ ಮೀಟುವುಡು ವೀಣೆಯ ತಂತಿ,
ಆಕಾಶದ ಎತ್ತರಕ್ಕೆ ಬೆಳೆಯಲಿ ನಿನ್ನ ಕೀರ್ತಿ,
ನೀರಿನಂತೆ ನಿರ್ಮಲವಾದ ನಿನ್ನ ನಗುವನ್ನು ಕಂಡು ಹೀಗೆ ಕೊಂಡಾಡಿದರು ಅನಂತಮೂರ್ತಿ...
ಮುಸ್ಸಂಜೆಯ ಕೆಂಪಾದ ಮೋಡಗಳನ್ನು ನಾಚಿಸುವ ನಿನ್ನ ಕೆನ್ನೆ ಕಂಡು ಕೇಳಿದನು ಆ ಗೋಕಾಕ...
ಯಾರಮ್ಮ ನಿನ್ನ ಬಾಳ ದೋಣಿಯ ನಾವಿಕ????

ಭೂಮಿಯಂತೆ ನಿಶ್ಚಲವಾದ ನಿನ್ನ ಮನಸ್ಸಿಗೆ ಮಳೆ ಸುರಿಸಿ ಪುನೀತವಾಯಿತು ಕಾರ್ಮೋಡ,
ನಿನ್ನ ವರ್ಣಿಸಲು ಪದಗಳಿಗೆ ಹುಡುಕಿತು ಕನ್ನಡ.....
ಕನ್ನಡಾಂಬೆಯ ಹಣೆಯ ಕುಂಕುಮದಸ್ಟು ಪವಿತ್ರವಾದ ನಿನ್ನ ಪ್ರೀತಿಗೆ ಧನ್ಯನಾಗಿ ಅಂದನು
ಆ ಗಿರೀಶ್ ಕಾರ್ನಾಡ....
ಭೂಪಟದಲ್ಲಿ ಮೆರೆಸಬೇಕೆಂದು ಪ್ರೀತಿಯ ಭವ್ಯ ಪರಂಪರೆಯನ್ನು ಸಾರುವ ನಿನ್ನಂಥ ಹೆಣ್ಣು ಇರುವ,
ಹೆಸರಿನಲ್ಲಿಯೇ ಕರುಣೆ ಇರುವ ನಮ್ಮ ಕರುನಾಡ............ 


ಹೃದಯದಿಂದ...........
   ದರ್ಶನ್.......  

ಮಗುವಿನಂಥ ಮನಸ್ಸಿನ ಸಮಾಧಿ....

ಈ ಮನದಾಳದ ಮಾತಿಗೆ ಸ್ಪೂರ್ತಿ...
ಪ್ರೀತಿಯಿಂದ ಹೃದಯವನ್ನು ಕೊಂದ ಒಬ್ಬಳು ಕೊಲೆಗಾತಿ...
ಅವಳು ಮನಸ್ಸನ್ನು ಕದ್ದ ಕಳ್ಳಿ
ಆಗಿರದೆ ಪ್ರೀತಿಯ ಮರದ ಬಳ್ಳಿ, ಇಟ್ಟಳು ಈ ಮನದ ಹುಚ್ಚು ಆಸೆ, ಕನಸುಗಳಿಗೆ ಕೊಳ್ಳಿ.....
ಹೃದಯ ಇಂದು ಪಾಳು ಬಿದ್ದ ಮನೆಯ ಅವಶೇಷ......
ಕಾರಣ, ಮಗುವಿನಂಥ ಮುಗ್ಧತೆಯಿಂದ ಪ್ರೀತಿಸಿದ ಮನಸ್ಸಿಗೆ ಅವಳು ಮಾಡಿದ ಮೋಸ...
ನಾನಂದುಕೊಂಡಿದ್ದೆ ಅವಳು ಆಗುವಳು ಈ ಹೃದಯದ ಪ್ರೀತಿ ದಾಹ ತೀರಿಸುವ ಜೀವನದಿ,
ಆದರೆ ಅವಳು ಈ ಹೃದಯ ಉಸಿರಾದದಂತೆ ಕಟ್ಟಿಬಿಟ್ಟಳು ಸಮಾಧಿ......
ಗಿದದಲ್ಲಿರುವ ಹೂವು ಅರಳಲು ಪ್ರತಿನಿತ್ಯ ಹಾಕಬೇಕು ನೀರು,,,,
ಒಡೆದ ಹೃದಯದಿಂದ ಸುರಿಯುತ್ತಿರುವ ರಕ್ತ ಅಳಿಸಲು ನಿತ್ಯ ಹಾಕುತ್ತಿದೆ ಮನಸ್ಸು ವೇದನೆಯ ಕಣ್ಣೀರು.....

ಪ್ರೀತ್ಸೋಕೆ ಮುಂಚೆ ಒಂದು ಕ್ಷಣ ಯೋಚಿಸಿ ಹೃದಯಗಳೇ.... ಆಡಿದರೆ ಹೋಯಿತು ಮಾತು, ಕಳೆದರೆ ಹೋಯಿತು ಮುತ್ತು, ಸೇರಿಸಲಾಗದು ಒಡೆದ ಹೃದಯವನ್ನು ಯಾವತ್ತೂ....


ಸಿಹಿಯಾದ ಕಲ್ಪನೆ... ಮಧುರವಾದ ಭಾವನೆ....



ದೂರವಾಗುತ್ತಿದೆ ಮನದಲ್ಲಿದ್ದ ಕೊರಗು...

ಹೃದಯದ ಪಿಸುಮಾತಿಗೆ ಮತ್ತೆ ಬಂದಿದೆ ಮೆರಗು...

ಮನದಲ್ಲಿ ಮೂಡಿದೆ ಹೂನಗು...

ಹೃದಯದ ತುಂಬಾ ಪ್ರೀತಿಯ ಹೋಳಿಯ ರಂಗು..

ನೀನೆ ನನ್ನ ಸರದಾರ ಎಂದಿತು ಅವಳ ಸೆರಗು....

ಸುರಿಸುತ ಪ್ರೀತಿಯ ಜೆನ ಮಳೆ ಅವಳ ಉಸಿರಿಗೂ,,

ಆದೆ ನಾನು ಅವಳ ಮಡಿಲಿನಲ್ಲಿ ಮಗು...




























ಈ ಹೃದಯದ ಉಸಿರಿಗೆ....

ಇಳೆಯ ಮೇಲಿನ ನೀರು ಆವಿಯಾಗಿ ಬರುವುದನ್ನೇ ಕಾಯುವುದು ಮುಗಿಲು..
ನೀನು ಹೃದಯಕ್ಕೆ ಪ್ರೀತಿಯಾಗಿ ಬರುವೆ ಎಂದು ಕಾದಿದ್ದೆ ನಾನು ತೆರೆದು ಈ ಹೃದಯದ ಬಾಗಿಲು,
ಮುಗಿಲು ಆವಿಯ ಮಿಲನದ ಫಲವೇ ಮೋಡಗಳು....
ನಮ್ಮ ಹೃದಯಗಳ ಮಿಲನಕ್ಕೆ ಕಾರಣವೇ ಹುಣ್ಣಿಮೆಯ ಚಂದ್ರನ್ನನ್ನೇ ನಾಚಿಸುವ ನಿನ್ನ ಕಂಗಳು...
ಮೋಡಗಳು ಸೇರಿದಾಗ ಮಾತನಾಡುವುದು ಸಿಡಿಲು...
ನೀ ಸನಿಹಕೆ ಬರಲು ಹೃದಯದಲ್ಲಿ ಉಕ್ಕಿತು ಪ್ರೀತಿ...ತಂಗಾಳಿಗೆ ಸೆಳೆತಕ್ಕೆ ಉಕ್ಕಿದಂತೆ ಕಡಲು....
ಸಿಡಿಲಿನ ಸಂಗೀತಕ್ಕೆ ಶ್ರುತಿ ಸೇರಿಸಿತು ಗುಡುಗು....
ಹೃದಯದಲ್ಲಿ ಹುಟ್ಟಿದ ಪ್ರೀತಿಗೇ ನಿನ್ನ ಉಸಿರಿನ ನಾದ ನೀಡಿತು ಮೆರುಗು....
ನಾಲ್ಕು ಹನಿಗಳಿಗಾಗಿ ರೈತ ಹಿಡಿದು ಕಾಯುವಂತೆ ನೇಗಿಲು,
ನಾನು ಕಾದಿದ್ದೆ ನಿನ್ನ ಕಂಗಳ ಅನಂದಬಾಷ್ಪಕ್ಕಾಗಿ ತೆಗೆಯಲು ಈ ಮನದಲ್ಲಿ ಪ್ರೀತಿಯ ಫಸಲು.... ಪ್ರೀತಿಯ ಮಳೆ ಸುರಿದು ತಂಪಾಗಿ ಪುನೀತಳಾದಳು ಇಳೆ,
ಸುರಿಸುತ ಜೇನಿನಹನಿಗಳು ತುಂಬಿದ ಪದಗಳ ಈ ಓಲೆ....
ತೊಡಿಸುವನು ಈ ಪ್ರೇಮಿ ನಿನ್ನ ಕೊರಳಿಗೆ ಕಾಮನಬಿಲ್ಲನ್ನು ಮಾಡಿ ಬಳೆ...
ನಿನ್ನ ನಾಚಿಕೆಯ ನೀರಿನಲ್ಲಿ ನಾನು ಸ್ನಾನವ ಮಾಡಲು,
ಸುಡುಬಿಸಿಲು ಕೂಡ ಆಯಿತು ನಿನ್ನ ನಗುವಿನಂತೆ ತಂಪಾದ ಬೆಳದಿಂಗಳು............

ಈ ಹೃದಯದ ಉಸಿರಿಗೆ........

ಪ್ರೀತಿಸುವುದು ಹೃದಯಗಳ ಪರಂಪರೆ,
ನನ್ನ ಮನಸ್ಸಿಗೆ ಆಸರೆ,
ಸುರಿವ ಮಳೆಯಲ್ಲಿಯೂ ಬೆವರಿಳಿಸುವ ನಿನ್ನ ತೋಳಸೆರೆ....
ಕಂಗಳ ಸನಿಹ ನೀ ಬಂದು ನನ್ನ ಬರಸೆಳೆದರೆ,
ಹೊರಗೆ ಬರಲಾರದು ಉಸಿರೇ.....
ಮನಸ್ಸಿನಲ್ಲಿ ಹುಟ್ಟಿದ ಭಾವನೆಗಳಿಗೆ "ಪ್ರೀತಿ" ಹೆಸರೇ?
ಬಾಳಿಗೆ ನೀ ಸುರಿಸಿದಕ್ಕೆ ಪ್ರೀತಿಯ ಅಮೃತಧಾರೆ,
ನಿನ್ನ ಹೃದಯಕ್ಕೆ ನನ್ನ ಹೃದಯವೇ ಒಲವಿನ ಉಡುಗೊರೆ.........

ಈ ಹೃದಯದ ಉಸಿರಿಗೆ....

ಮನಸ್ಸು ಯಾರ ಕ್ಯಗೂ ಸಿಗದ ಗುಪ್ತಗಾಮಿನಿ,
ಪ್ರೀತಿ ಅದರಲ್ಲಿ ಹರಿಯುವ ನಿರಂತರ ಅಮೃತವಾಹಿನಿ,
ಪ್ರೀತ್ಸೋ ಜೀವಕ್ಕೆ ಅಮೃತವರ್ಷಿಣಿ....

ಕರುನಾಡ ಹೆಣ್ಣಿಗೆ ಅಲಂಕಾರ....

ಕುಣಿಗಲ್ ಕೆರೆಯ ದಡದಲ್ಲಿ ನಾನು ಕವಿತೆ ಬರೆಯಲು ಕುಳಿತಿದ್ದೆ,
ಮೈಸೂರ ಮಲ್ಲಿಗೆಯ ಪರಿಮಳವನ್ನು ಹೃದಯಕ್ಕೆ ನೀ ಚೆಲ್ಲಿದೆ...
ಚೆಲುವಿನಲ್ಲಿ ನೀನು ಚನ್ನಪಟ್ಟಣದ ಗೊಂಬೆ...
ನಿನ್ನ ಕಂಡು ನಾಚಿತು ಮಳೆಯಲ್ಲಿ ಮೈ ನೆನೆದ ಆಗುಂಬೆ...
ನಿನ್ನ ಕೆಂಪಾದ ಕೆನ್ನೆ ಕೊಡಗಿನ ಕಿತ್ತಳೆ,
ನಿನ್ನ ಕ್ಯಗೆ ಮಲೆನಾಡ ಮಳೆಬಿಲ್ಲೇ ಕ್ಯಬಳೆ.....


ನಿನ್ನ ಕಣ್ಣು ಕಾರವಾರದ ಕಡಲ ತೀರದ ಹುಣ್ಣಿಮೆ,
ನಿನ್ನ ಕೂದಲು ರಾಮನಗರದ ರೇಶಿಮೆ....
ಮಂಡ್ಯದ ಬೆಣ್ಣೆಯಂತೆ ಬಹಳ ಮೃದು ನಿನ್ನ ಮನಸ್ಸು,
ಜೋಗದ ಜಲಪಾತದ ಭವ್ಯ ನೋಟದಂತೆ ಸೊಗಸು...

ನಿನ್ನ ಒಲವು ಕೋಲಾರದ ಚಿನ್ನದ ಗಣಿ,
ನಿನ್ನ ಕಂಡು, ಪ್ರೀತಿಯ ಕಣಿ ಹೇಳಿತು ನಾಗರಹೊಳೆಯ ಗಿಣಿ...
ನಿನ್ನ ರೂಪ ಬೇಲೂರ ಶಿಲ್ಪಕಲೆಯಂತೆ ಮೋಹಕ,
ನಿನ್ನ ಉಸಿರುಗಟ್ಟಿಸುವ ಅಪ್ಪುಗೆ, ಸಹ್ಯಾದ್ರಿಯ ತಂಗಾಳಿಯಂತೆ ರೋಚಕ.....

ನಿನ್ನ ಮನಸ್ಸು ಕರುನಾಡಿನ ಭಾವುಟ,
ನಿನಗೆ ಕೊಡುಗೆ, ನನ್ನ ಹೃದಯದ ಭೂಪಟ...
ಹೃದಯದಿಂದ,
  ದರ್ಶನ್........

ಪ್ರೀತ್ಸೋ ಹೃದಯಕ್ಕೆ ಜೋಗುಳ...

ಹುಣ್ಣಿಮೆಯ ನೆರಳೇ, ಚಂದಿರನ ಮಗಳೇ,
ಮಾಮರದ ಹಸಿರೆ, ಈ ಹೃದಯದ ಉಸಿರೇ.....
ಮಾಡದೆ ಯಾವುದೇ ಚಿಂತೆ, ಸಿಹಿಕನಸು ಕಾಣುವಂತೆ,
ಮಲಗು ಹಾಯಾಗಿ ನನ್ನ ಮಡಿಲಿನಲ್ಲಿ ಮಗುವಿನಂತೆ........
ಧೂರಿ....ಧೂರಿ.... ನನ್ನ ಜೀವ ಧೂರಿ ಧೂರಿ......
ಲಾಲಿ... ಲಾಲಿ... ನನ್ನ ಪ್ರಾಣ ಲಾಲಿ ಲಾಲಿ.........

ಮುಂಗಾರಿನ ಮಳೆಯೇ, ಸಾಗರದ ಮುತ್ತಿನ ಮಣಿಯೆ,
ಬಂಗಾರದ ಹೂವೆ, ಬೆಳದಿಂಗಳ ಚೆಲುವೆ,
ತಿಂಗಳ ತಂಪಿನಲ್ಲಿ, ತಂಗಾಳಿ ಕಂಪಿನಲ್ಲಿ....
ಮಾಡದೆ ಯಾವುದೇ ಚಿಂತೆ, ಸಿಹಿ ಕನಸು ಕಾಣುವಂತೆ,
ಮಲಗು ಹಾಯಾಗಿ ನನ್ನ ಮಡಿಲಿನಲ್ಲಿ ಮಗುವಿನಂತೆ,
ಧೂರಿ.. ಧೂರಿ.. ನನ್ನ ಜೀವ ಧೂರಿ... ಧೂರಿ........
ಲಾಲಿ.. ಲಾಲಿ.. ನನ್ನ ಪ್ರಾಣ.. ಲಾಲಿ... ಲಾಲಿ......

ಹೃದಯದ ಅಭಿಲಾಷೆ.........

ನೀನು ನನ್ನ ಹೃದಯದಲ್ಲಿ ಅರಳಿದ ಮಂದಾರ.....
ಮನದಲ್ಲಿ ಹುಟ್ಟಿದ ಅಭಿಲಾಷೆ ಹೇಳಬಯಸಿದ್ದಾನೆ ನಿನ್ನ ಹೃದಯ ಗೆದ್ದ ಚೋರ........
ನಾನೇ ಆಗಬೇಕು ನಿನ್ನ ಸೆರಗಿಗೆ ಸರದಾರ,
ನಿನ್ನ ಮುದ್ದಾದ ಕಾಲ ಬೆರಳಿಗೆ ಕಾಲುಂಗುರ,
ನಿನ್ನ ಹಣೆಗೆ ಸಿಂಧೂರ,
ನಿನ್ನ ಹೃದಯಕ್ಕೆ ನಾನೇ ವಾರಸ್ದಾರ....
ತೊಡಿಸಲು  ನಿನ್ನ ತುಟಿಗಳಿಗೆ ಮುತ್ತಿನ ಹಾರ....
ಕಾಯುತ್ತಿರುವನು ನಿನ್ನನ್ನೇ ಕಂಗಳಲ್ಲಿ ತುಂಬಿಕೊಂಡು ಕನಸು ಕಾಣುತ್ತಿರುವ ಕನಸುಗಾರ.....

   

ಪಿಸುಮಾತು ಆಯಿತು ಕವನ

ನೀನು ಎದೆಯ ಬಾಗಿಲಿಗೆ ತೋರಣ,ಹೃದಯದ ಹೋಳಿಗೆಗೆ ಹೂರಣ....

ನಿನ್ನಿಂದಲೇ ಮನಸ್ಸಿನಲ್ಲಿ ಆಗಿದ್ದು 

ಪ್ರೀತಿಯ ಜನನಹಾಳಾದ ಕೊಂಪೆ ಆಗಿತ್ತು ಮನಸ್ಸಿನ ಆವರಣ

ನಿನ್ನ ಪ್ರೀತಿ ಅಳಿಸಿ ಹಾಕಿ ಮನಸ್ಸಿನ ಕಲ್ಮಶವನ್ನ

ಆಯಿತು ಪ್ರೀತಿ ತುಂಬಿದ ಮನಸ್ಸಿನ ಅನಾವರಣ

ನಿನ್ನ ನಗು ಪ್ರಕೃತಿಗೆ ಆಭರಣನಿನ್ನ ನೋಟ ಬೆಳದಿಂಗಳ ಶಶಿಕಿರಣ

ನಿನ್ನ ಪ್ರೀತಿಸಲು ನನಗೆ ಬೇಕಿಲ್ಲ ಕಾರಣ

ನಿನ್ನೊಂದಿಗೆ ಸವೆಸಲು ಆಸೆ ಈ ಬಾಳ ಪಯಣ...

ನಿನ್ನ ಪ್ರೀತಿಸುತ್ತಲೇ ಈ ಹೃದಯದ ಪಿಸುಮಾತು ಆಯಿತು ಕವನ.....

ಹಾಗೆ ಸುಮ್ಮನೆ

ಪ್ರೀತಿ ಪ್ರಕೃತಿಯ ಸುಂದರ ಕಲ್ಪನೆ,,,

ಪ್ರೀತಿ ಮನಸ್ಸಿನ ಅತ್ಯಂತ ಮಧುರವಾದ ಭಾವನೆ...

ಪ್ರೀತಿ ಮನಸ್ಸಿಗೆ ಸಿಹಿಯಾದ ಯಾತನೆ....

 ಪ್ರೀತಿಸಿದ ಮೇಲೆ ಮಾಡಬಾರದು ಯೋಚನೆ,,,,

ಯಾಕೆ ಅಂದ್ರೆ ಪ್ರೀತಿ ಹುಟ್ಟುವುದು ನೀಡದೆ ಸೂಚನೆ....

ಅವಳ ನೆನಪು ಬರುತ್ತಿದೆ ಹೃದಯದಲ್ಲಿ ಮೆಲ್ಲನೆ,,,,

ಅವಳು ಕೊಟ್ಟ ಸಿಹಿಮುತ್ತನ್ನು ನೆನೆದು ಕೆಂಪಾಗುತ್ತಿದೆ ಕೆನ್ನೆ....

ಬರೆಯುತಾ ಪ್ರೀತಿಯ ಬಗ್ಗೆ, ಹೃದಯದ ಪಿಸುಮಾತು ಹಾಡಾಯಿತು ಹಾಗೆ ಸುಮ್ಮನೆ...

ನವಿಲುಗರಿಯಷ್ಟೇ ಸುಂದರ

ಮರಳ ಮೇಲೆ ನಿನ್ನ ಬೆರಳು ಹಿಡಿದು ಬರೆಯುವೆ ಒಲವಿನ ಅಕ್ಷರ

ಪ್ರೀತಿಸಲು ಶುರು ಮಾಡಿದಾಗ ನಾವು ಪರಸ್ಪರ

ನಾಚಿಕೆಯಿಂದ ಹಸಿರಾಯಿತು ಪ್ರಕೃತಿಯ ಪರಿಸರ ...

ಇರಬಹುದು ನನ್ನ ಹೃದಯ ಪ್ರೀತಿಯ ಸರೋವರ ಆದರೆ ನೀನು

ಪ್ರೀತಿಯಲ್ಲಿ ನನ್ನನ್ನು ಮೀರಿದ ಸಾಗರ  ನಿನ್ನಿಂದಲೇ ಈ ಜೀವನದ ಸಾಕ್ಷಾತ್ಕಾರ  

ನೀನಿಲ್ಲದ ಜೀವನದಲ್ಲಿ ಇಲ್ಲ ಸಡಗರ ನೀನು ಮನಸ್ಸಿನ ಪುಟಗಳಲ್ಲಿ ನಡುವೆ ಇಟ್ಟ ನವಿಲುಗರಿಯಷ್ಟೇ ಸುಂದರ....

ಮನಸ್ಸಿನ ತುಂಬಾ ಹಬ್ಬದ ಸಂಭ್ರಮ


ಉಸಿರಿನ ವೀಣೆಯು ನುಡಿಸುತಿದೆ ರೋಮಾಂಚನದ ಸರಿಗಮ....


ಕಾರಣ, ನನ್ನನಿನ್ನ ಹೃದಯಗಳ ಸಂಗಮ...

ಪ್ರೀತಿ ಹೃದಯದಲ್ಲಿ ಅರಳುವ ಸುಮ....

ಪ್ರೀತಿಯಿಂದಲೇ ಆಗುವುದು ದುಂಬಿ-ಸುಮಗಳ ಸಮಾಗಮ....

ಪ್ರೀತಿ ತುಂಬಿದ ಕಣ್ಣಿನ ನೋಟ ಹೃದಯಂಗಮ

ನೀನಿರಲು ನನ್ನ ಬಾಹುಗಳಲ್ಲಿ, ಮನಸ್ಸಿನ ತುಂಬಾ ಹಬ್ಬದ ಸಂಭ್ರಮ.....

ಈ ಕವಿತೆಗೆ ನೀನೇ ಸ್ಪೂರ್ತಿ

ಈ ಕವಿತೆಗೆ ನೀನೇ ಸ್ಪೂರ್ತಿ....

ಹೃದಯದ ಕಲ್ಲನ್ನು ಕೆತ್ತಿ,ನೀ ಮಾಡಿದೆ ನನ್ನನ್ನು ಮೂರ್ತಿ...

ಬೆಳಗಲಿ ಭೂಮಿ ಇರುವವರೆಗೂ ನಿನ್ನ ಕೀರ್ತಿ.....

ಈ ಹೃದಯ ಹೂವಾಗಲು ಕಾರಣ ನಿನ್ನ ಪ್ರೀತಿ.....

ನೀನು ಇರುವುದಾದರೆ ನನ್ನೊಂದಿಗೆ ಇದೆ ರೀತಿ

ಜೊತೆಜೊತೆಯಲಿ ಹೆಜ್ಜೆ ಹಾಕುವೆ ನಿನ್ನ ಜೊತೆ ಜೀವನ ಪೂರ್ತಿ........

ಅವಳ ಪ್ರೀತಿಯೊಂದೆ ಕಾರಣ

ಚೆಂದವಾಗಿರಲು ನನ್ನ ಕವನ,

ಅವಳ ಪ್ರೀತಿಯೊಂದೆ ಕಾರಣ....

ಅವಳ ನಗು ಕಂಪನ್ನು ಬೀರುವ ಚಂದನ

ಅವಳ ಉಸಿರುಏ ಜೀವಕ್ಕೆ ಅಮೃತ ಸಿಂಚನ.....

ಅವಳ ಪ್ರೀತಿ ಪಡೆದ ನನ್ನ ಮನಸ್ಸಾಯಿತು ಪಾವನ

ಬಿಡೋದಕ್ಕೆ ಸಿದ್ಧ ಅಂತಾರೆ ಪ್ರಾಣ, ಪ್ರೀತಿಯಲ್ಲೇ ಪ್ರಾಣಇರೋದು ಅಂತ ತಿಳಿಯದೆ ಇರೋ ಜನ......

ತೀರಿಸಲಾಗದು ಪ್ರೀತಿ ಕೊಟ್ಟ ಹೃದಯದ, ಹೆತ್ತವರ ಋಣ.....

ಪ್ರೀತಿ ಬಾಳ ದಾರಿಯಲಿ

ಪ್ರೀತಿ ಬಾಳ ದಾರಿಯಲಿ ನಿರಂತರ ಪಯಣ...

ಎರಡು ಹೃದಯಗಳ ಅಯನ......

ಮನಸ್ಸಿಗೆ ಅಮೃತದ ಸಿಂಚನ.....

ಬೆಚ್ಚನೆಯ ಬಾಹುಗಳ ಸಿಹಿಯಾದ ಕಂಪನ....

ಪ್ರೀತಿಸುವಾಗ ಎರಡು ತುಟಿಗಳು ಯಾವಾಗಲೂ ಮೌನ...

ಬರೆಯುತಾ ಬರೆಯುತಾ ಹೃದಯದ ಪಿಸುಮಾತು ಆಯಿತು ಕವನ......

ನೋಡಿ ಆ ನಿನ್ನ ಕಂಗಳು

ನೋಡಿ ನಿನ್ನ ಕಂಗಳು,
ತಂಪಾಯಿತು ಬಿಸಿಲು.....
ನಲಿದದುತ್ತಿರಲು ನಿನ್ನ ಮುಂಗುರುಳು,
ನಾಚಿ ಕರಗಿತು ಬೆಳದಿಂಗಳು....
ನಿನ್ನ ಮನಸ್ಸು ಪ್ರೀತಿಯ ಕಡಲು..
ಪ್ರೀತಿಯ ಮಳೆಯಾಗಿ ನೀನು ಬರಲು,
ಸ್ವಾಗತಿಸುವೆ ನಿನ್ನನ್ನು ತೆರೆದು ಹೃದಯದ ಬಾಗಿಲು........

ಏನೆಂದು ಬರೆಯಲಿ ನಿನ್ನ ಬಗ್ಗೆ

ಏನೆಂದು ಬರೆಯಲಿ ನಿನ್ನ ಬಗ್ಗೆ?????
ನೀನು ನನ್ನಲ್ಲಿ ಸ್ಫೂರ್ತಿ ಉಕ್ಕಿಸುವ ಬುಗ್ಗೆ,
ನೀನಿಲ್ಲದೆ ಇರದು ಈ ಜೀವ ನನ್ನ ದೇಹದಲ್ಲಿ ಒಂದೂ ಘಳಿಗೆ....
ನೀನು ಪ್ರೀತಿಯ ಪರಿಮಳ ಸೂಸುವ ಮಲ್ಲಿಗೆ
ಕಂಡರೆ ನಿನ್ನ ಸಿಹಿಯಾದ ಮುಗುಳ್ನಗೆ
ಕಲ್ಲು ಕೂಡ ಅರಳಿ ಹೂವಾಗುವುದು ಮೆಲ್ಲಗೆ
ಹಚ್ಚಿ ಹೃದಯದಲ್ಲಿ ಪ್ರೇಮದ ದೀವಿಗೆ
ಬೆಳಕು ತಂದೆ ಕತ್ತಲಾಗಿದ್ದ ಬಾಳಿಗೆ
ನಮ್ಮ ಜೀವನ ಪ್ರೀತಿಯ ತೇರಿನ ಮೆರವಣಿಗೆ
ನಿನ್ನಿಂದಲೇ ನಿನಗಾಗಿ ನಿನಗೊಸ್ಕರವೇ ಈ ಬರವಣಿಗೆ

ಅವಳು ಮಾಡಿದ ಮೋಸ

ನಾನು ಸಾಕಿದ ಗಿಣಿ ಗಿಡುಗವಾಯಿತು....
ಅವಳು ಮಾಡಿದ ಮೋಸ ನನ್ನ ಹೃದಯವನ್ನು ಕಿತ್ತು ತಿಂದಿತ್ತು...
ನನ್ನ ಹೃದಯದಲ್ಲಿ ಬೆಳೆಸಿದ್ದ ಹೂವು ಹಾವಾಯಿತು....
ಆಗದಿದ್ದರೂ ನನ್ನಿಂದ ಅವಳಿಗೆ ಯಾವುದೇ ಆಪತ್ತು,
ಬಿಟ್ಟು ಹೋಗಬೇಡ ಎಂದು ಕೂಗಿ ಕರೆದರೂ ಕೇಳಿಸದ ಹಾಗೆ ಹೋದಳು ಹೊರಟು...
ಮಾಡಿ ಹೃದಯದಲ್ಲಿ ಅಳಿಸಲಾಗದ ಗಾಯದ ಗುರುತು,
ಹೊರಟೆ ಹೋದಳು ನಾನು ಅವಳ ಮೇಲೆ ಸುರಿಸಿದ ಪ್ರೀತಿಯ ಮಳೆಯ ಮರೆತು....
ನನ್ನ ಮನಸ್ಸಿನಲ್ಲಿದ್ದ ಕನಸುಗಳೆಲ್ಲ ಸ್ಮಶಾನ ಸೇರಿವೆ ಸತ್ತು,
ಕಾರಣ ಅವಳು ಕೊಟ್ಟ ಜೀವ ಕಳೆವ ಅಮೃತದ ತುತ್ತು...
ಹೀಗೆ ಹುಟ್ಟಿದ್ದು ಈ ಹೃದಯದ ಪಿಸುಮಾತು.......

ಪ್ರೀತ್ಸೋಕೆ ಮುಂಚೆ ಒಂದು ಕ್ಷಣ ಯೋಚಿಸಿ ಹೃದಯಗಳೇ....
Bcoz....ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು...ಹೃದಯ ಒಡೆದರೆ ಸೇರಿಸಲಾಗದು ಯಾವತ್ತೂ.............

ಪ್ರೀತಿಯ ಮುಂಗಾರು

ಅವಳು ಜೊತೆಯಲ್ಲಿದ್ದಾಗ ಮನಸ್ಸಿನಲ್ಲಿ ಸುರಿಯುತಿತ್ತು ಪ್ರೀತಿಯ ಮುಂಗಾರು....
ಅವಳಿಲ್ಲದೆ ಈಗ,ಹೃದಯ ಪಾಳು ಬಿದ್ದ ಸೂರು...
ಅವಳ ಪ್ರೀತಿಯಿಲ್ಲದೆ ಬರಿದಾಗಿದೆ ಮನಸ್ಸಿನ ಬಸಿರು...
ಅವಳು ಬಿಟ್ಟುಹೋದದ್ದು ಒಡೆದ ಮನಸ್ಸಿನ ಸಾವಿರ ಚೂರು,
ಹೃದಯದಲ್ಲಿ ನೋವಿನ ನಿಟ್ಟುಸಿರು,
ಕಂಗಳಲ್ಲಿ ವೇದನೆಯ ಕಣ್ಣೀರು..........