ಈ ಮನದಾಳದ ಮಾತಿಗೆ ಸ್ಪೂರ್ತಿ...
ಪ್ರೀತಿಯಿಂದ ಹೃದಯವನ್ನು ಕೊಂದ ಒಬ್ಬಳು ಕೊಲೆಗಾತಿ...
ಅವಳು ಮನಸ್ಸನ್ನು ಕದ್ದ ಕಳ್ಳಿ
ಆಗಿರದೆ ಪ್ರೀತಿಯ ಮರದ ಬಳ್ಳಿ, ಇಟ್ಟಳು ಈ ಮನದ ಹುಚ್ಚು ಆಸೆ, ಕನಸುಗಳಿಗೆ ಕೊಳ್ಳಿ.....
ಹೃದಯ ಇಂದು ಪಾಳು ಬಿದ್ದ ಮನೆಯ ಅವಶೇಷ......
ಕಾರಣ, ಮಗುವಿನಂಥ ಮುಗ್ಧತೆಯಿಂದ ಪ್ರೀತಿಸಿದ ಮನಸ್ಸಿಗೆ ಅವಳು ಮಾಡಿದ ಮೋಸ...
ನಾನಂದುಕೊಂಡಿದ್ದೆ ಅವಳು ಆಗುವಳು ಈ ಹೃದಯದ ಪ್ರೀತಿ ದಾಹ ತೀರಿಸುವ ಜೀವನದಿ,
ಆದರೆ ಅವಳು ಈ ಹೃದಯ ಉಸಿರಾದದಂತೆ ಕಟ್ಟಿಬಿಟ್ಟಳು ಸಮಾಧಿ......
ಗಿದದಲ್ಲಿರುವ ಹೂವು ಅರಳಲು ಪ್ರತಿನಿತ್ಯ ಹಾಕಬೇಕು ನೀರು,,,,
ಒಡೆದ ಹೃದಯದಿಂದ ಸುರಿಯುತ್ತಿರುವ ರಕ್ತ ಅಳಿಸಲು ನಿತ್ಯ ಹಾಕುತ್ತಿದೆ ಮನಸ್ಸು ವೇದನೆಯ ಕಣ್ಣೀರು.....
ಪ್ರೀತ್ಸೋಕೆ ಮುಂಚೆ ಒಂದು ಕ್ಷಣ ಯೋಚಿಸಿ ಹೃದಯಗಳೇ.... ಆಡಿದರೆ ಹೋಯಿತು ಮಾತು, ಕಳೆದರೆ ಹೋಯಿತು ಮುತ್ತು, ಸೇರಿಸಲಾಗದು ಒಡೆದ ಹೃದಯವನ್ನು ಯಾವತ್ತೂ....
Subscribe to:
Post Comments (Atom)
July 30, 2010 at 12:25 AM
Nice one sir
August 4, 2010 at 6:30 PM
abba mosty yalla bagna premiya uvachaa ide irbeku...[;)]
August 10, 2010 at 1:37 AM
Its amazing, super... very nice